logo

*ಭಾವಿಯಲ್ಲಿ ಕಾಲು ಜಾರಿ ಬಿದ್ದಿರುವ ಅಡವಿ ನರಿ ಕಾಪಾಡಿದ ಅಥಣಿ ಅಗ್ನಿಶಾಮಕ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ

*ಭಾವಿಯಲ್ಲಿ ಕಾಲು ಜಾರಿ ಬಿದ್ದಿರುವ ಅಡವಿ ನರಿ ಕಾಪಾಡಿದ ಅಥಣಿ ಅಗ್ನಿಶಾಮಕ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಯವರು* ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ *ಕೋಹಳ್ಳಿ * ಗ್ರಾಮದಲ್ಲಿ ಅಡವಿ ನರಿಯು ಕಾಲು ಜಾರಿ **ಹನಮಂತ.ಮಲ್ಲಪ್ಪ ವಾಘಮೋರೆ * ಎಂಬುವರ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ *03/05/2024* ರಂದು ಬೆಳಗಿನ ಜಾವ ಸಮಯ *11:30ಕ್ಕೆ* ಶುಕ್ರವಾರ ನಡೆದಿದೆ. ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಧಾಕ್ಷಣ ಸ್ಥಳಕ್ಕೆ ಜಲವಾಹನ ಮತ್ತು ಸಿಬ್ಬಂದಿಯವರು ರಕ್ಷಣಾ ಸಾಮಗ್ರಿಗಳೊಂದಿಗೆ *ಶ್ರೀ* *ಮಲ್ಲಿಕಾರ್ಜುನ .ಎಂ.ಬಂದಾಳ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರವರ* ನೇತೃತ್ವದಲ್ಲಿ ಸಿಬ್ಬಂದಿಯವರು ಹಾಗು ಅರಣ್ಯ ಅಧಿಕಾರಿ ಸಿಬ್ಬಂದಿಯವರು ಒಳಗೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ನೀರಿರುವ ಬಾವಿಯಲ್ಲಿ ಅಂದಾಜು 55 ರಿಂದ 60 ಅಡಿ ಆಳದಲ್ಲಿ ಅಡವಿ ನರಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಸುಮಾರು 03 ಗಂಟೆ 10 ನಿಮಿಷಗಳ ಕಾಲ ಕಷ್ಟಕರ ಜoಟಿ ಕಾರ್ಯಚರಣೆಯನ್ನು ಮಾಡಿ ಅಡವಿ ನರಿಯನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು. *ಈ ರಕ್ಷಣಾ ಕಾರ್ಯಚರಣೆ ಭಾಗವಹಿಸಿದ ಸಿಬ್ಬಂದಿಯ ವಿವರಗಳು*01) ಮಲ್ಲಿಕಾರ್ಜುನ .ಎಂ.ಬಂದಾಳ 02) ಮಲ್ಲನಗೌಡ. ನಾಯಕ್ 03)ಸಂಜೀವ.ಚೌಗಲಾ 04) ರವೀಂದ್ರ.ಸಂಗಮ 05) ಸಚಿನ ಹಲ್ಯಾಳ 06) ಸಂತೋಷ್ ಚೌಗುಲಾ ಅರಣ್ಯ ಇಲಾಖೆ ಸಿಬ್ಬಂದಿಯವರಾದ 01) ಮಂಜುನಾಥ ಪಾಟೀಲ 02)ಅಶೋಕ.ದನವಡೆ. 03) ಮಹಾಂತೇಶ.ಚೌಗಲಾ 04) ಸುರೇಶ.ಭಾಗಿ ಊರಿನ ಗ್ರಾಮಸ್ಥರು ಕಾರ್ಯಾಚರಣೆ ಕೈಗೊಂಡಿದ್ದರು.

34
785 views